ಕೆ.ವಿಶ್ವನಾಥರೆಡ್ಡಿ, ಬೀರಪ್ಪ, ಅನಿಲ್ಕುಮಾರ್ ನಿರ್ಮಿಸುತ್ತಿರುವ ಮಂಜಿ ಮದುವೆ ಕರಿಯನ ಜೊತೆ ಚಿತ್ರಕ್ಕೆ ಕಳೆದ ವಾರ ಮುಳಬಾಗಿಲ ಹತ್ತಿರದ ಡಾಬಾದಲ್ಲಿ ಆಲಿಶಾ, ರೋಹಿತ್ ಹಾಗೂ ನಾಗೇಂದ್ರ ಅಭಿನಯಿಸಿದ ಪಡ್ಡೆ ಹುಡುಗರ ಅಡ್ಡೆಯಲ್ಲಿ ಒಂಟಿ ಹುಡುಗಿ ಬಂದಾಳಲ್ಲ, ತಳುಕು, ಬಳುಕು ಲಂಗ ನೋಡಿ, ಹಿಂದೆ ಮುಂದೆ ಬಿದ್ದೇವಲ್ಲ. ಎಂಬ ಐಟಂ ಹಾಡೊಂದಕ್ಕೆ ಚಿತ್ರೀಕರಿಸಿಕೊಳ್ಳಾಯಿತು.
ಎಲ್.ಎಂ.ಗೌಡ, ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸರವಣ್ ಕುಮಾರ್, ರಾಜು ಸಿರಾ ಛಾಯಾಗ್ರಹಣ, ವೆಂಕಟೇಶ್ ಜೋಷಿ ಸಂಗೀತ, ಕೆ.ಎನ್.ಕೆ.ರಾವ್ ಸಂಭಾಷಣೆ, ಕೆ.ವಿಶ್ವನಾಥ್ ರೆಡ್ಡಿ, ವೆಂಕಟೇಶ್ ಜೋಷಿ ಸಾಹಿತ್ಯ, ಮನು ನೃತ್ಯ ನಿರ್ದೇಶನ, ಸಿ.ಹೆಚ್.ಕುಮಾರ್ ಸಂಕಲನವಿದೆ. ಅನಿಲ್ ಕುಮಾರ್, ನವ್ಯ, ಕವನ, ಶೋಭಾ, ಗಬ್ಬರ್, ಸೀನ, ರೋಹಿತ್, ನಾಗೇಂದ್ರ, ಆಲಿಶಾ, ಮಂಜು, ಜಿ. ವೆಂಕಟರಮಣಪ್ಪ ವೆಂಕಟೇಶ್ ತಾರಾಬಳಗದಲ್ಲಿದ್ದಾರೆ.